ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಬದುಕು ಅಂದುಕೊಂಡಷ್ಟು ಕಷ್ಟವಲ್ಲ, ಅಂದುಕೊಂಡಿದ್ದಕ್ಕಿಂತ ಸರಳ!

ಸಂಪಾದಕನಾಗುವುದರ ಬಹುದೊಡ್ಡ ಪ್ರಯೋಜನವೆಂದರೆ ಓದುಗರ ಜತೆ ನಿತ್ಯ ಸಾಂಗತ್ಯದಲ್ಲಿರುವುದು ಎಂಬ ಮಾತನ್ನು ನಾನು ಸದಾ ಅನುಭವಿಸುತ್ತಲೇ ಇರುತ್ತೇನೆ. ಪತ್ರಿಕೆಯಲ್ಲಿ ಒಂದು ತಪ್ಪಾದರೆ, ಉತ್ತಮ ಶೀರ್ಷಿಕೆ ನೀಡಿದರೆ, ತುಸು ಅಶ್ಲೀಲ ಎಂಬಂಥ ಫೋಟೋ ಪ್ರಕಟಿಸಿದರೆ, ಒಳ್ಳೆಯ ವರದಿ ಪ್ರಕಟಿಸಿದರೆ ನೂರಾರು ಓದುಗರು ಫೋನ್, ಎಸ್ಸೆಮ್ಮೆಸ್ ಮೂಲಕ ತಮ್ಮ ಅನಿಸಿಕೆಗಳನ್ನು ಹರಿದುಬಿಡುತ್ತಾರೆ. ತಾವು ಕಂಡ ಅನ್ಯಾಯ, ಅನಾಚಾರಗಳನ್ನು ವರದಿ ಮಾಡಿ ಎಂದು ವಿವರಗಳನ್ನು ನೀಡುತ್ತಾರೆ.

ಇಷ್ಟೇ ಅಲ್ಲ, ಇನ್ನು ಕೆಲವರು ಅದನ್ನು ಓದಿ, ಇದನ್ನು ಓದಿ ಎಂದು ಶಿಫಾರಸ್ಸು ಮಾಡುತ್ತಾರೆ. ಮತ್ತೆ ಕೆಲವರು ಆಫೀಸಿಗೆ ಬಂದು ಪುಸ್ತಕಗಳನ್ನು ಕೊಟ್ಟು, ಇದನ್ನು ಓದಿ ಇದರ ಬಗ್ಗೆ ಬರೆಯಲೇಬೇಕು ಎಂದು ತಾಕೀತು ಮಾಡಿ ಹೋಗುತ್ತಾರೆ. ಮೊನ್ನೆ ಉದಯಕುಮಾರ್ ಎಂಬುವವರು ಬಂದಿದ್ದರು. ಅವರು ಈ ಹಿಂದೆ ಹಲವು ಸಲ ಇಮೇಲ್ ಮಾಡಿದ್ದರು. ಪತ್ರಿಕೆಯ ಅಭಿಮಾನಿ. ಅವರು ಬಹಳ ಕಷ್ಟ ಪಟ್ಟು ಜೀವನದಲ್ಲಿ ನೆಲೆ ನಿಂತವರು. ಕಚೇರಿಯೊಂದರಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡು ಈಗ ತಮ್ಮದೇ ಆದ ಕಂಪನಿಯೊಂದನ್ನು ಹುಟ್ಟುಹಾಕಿದ್ದಾರೆ. ಸ್ವಾಮಿಗಳನ್ನು ನೋಡುವಾಗ ಹಣ್ಣು-ಕಾಯಿಗಳನ್ನು ಒಯ್ಯುವಂತೆ, ನನ್ನನ್ನು ಭೇಟಿಯಾಗಲು ಬರುವಾಗ ಪುಸ್ತಕವನ್ನು ತಂದಿದ್ದರು.  ಸಾರ್, ಸಾಧ್ಯವಾದರೆ ಈ ಪುಸ್ತಕವನ್ನು ಓದಿ, ತುಂಬಾ ಚೆನ್ನಾಗಿದೆ. ನೀವು ಓದಿದರೆ ಅದರ ಬಗ್ಗೆ ಬರೆದೇ ಬರೆಯುತ್ತೀರಿ. ಉತ್ತಮ ವಿಚಾರಗಳು ನಾಲ್ಕು ಜನರಿಗೆ ಗೊತ್ತಾಗಲಿ ಎಂದು ಹೇಳಿ ಹೋದರು.

ಹೀಗೆ ಓದುಗರು ಕೊಟ್ಟು ಹೋದ ಪುಸ್ತಕಗಳ ಮೇಲೆ ನನ್ನ ಬಿಡುವಿಲ್ಲದ ಕೆಲಸಗಳ ಮಧ್ಯದಲ್ಲಿಯೂ ಒಮ್ಮೆ ಕಣ್ಣಾಡಿಸಿರುತ್ತೇನೆ. ಆದರೆ ಈ ಪುಸ್ತಕ ಹೇಗೊ ಕಣ್ತಪ್ಪಿಸಿಕೊಂಡಿತ್ತು. ನಿನ್ನೆ ಕಣ್ಣಿಗೆ ಬಿದ್ದಿದ್ದೇ ತಡ, ಓದಲಾರಂಭಿಸಿದೆ. ಪುಸ್ತಕ ಪಕ್ಕಕ್ಕಿಟ್ಟಾಗ ಬೆಳಗಿನ ಎರಡೂವರೆ.  ಪುಸ್ತಕದ ಹಿಂದಿನ ಪುಟದಲ್ಲಿದ್ದ  ಒಂದು ಸಾಲು ಈ ಕೃತಿಯ ಬಗ್ಗೆ ಕುತೂಹಲವನ್ನು ಮೂಡಿಸಿತು. ಅಲ್ಲಿ ಬರೆದಿತ್ತು -  Success is in the big things, happiness is in the small things, meditation is in nothing, God is in everything, That’s life.

ಆ ಪುಸ್ತಕದ ಬಗ್ಗೆ ಸಣ್ಣ ಕುತೂಹಲ ಮೂಡಿದ್ದು ಆಗಲೇ. ಬಳಿಕ ನಾನು ಮುಖಪುಟದ ಕಡೆಗೆ ಹೊರಳಿದೆ. ಮುಖಪುಟದಲ್ಲಿ ಬರೆದಿತ್ತು – My Dear Readers… Unspotted Letter, Loving You, T.T.Ranga Rajan (Excited to be alive) ನಿಮ್ಮಲ್ಲಿ ಎಷ್ಟು ಜನ ಈ ಟಿ.ಟಿ. ರಂಗರಾಜನ್ ಅವರ ಹೆಸರನ್ನು ಕೇಳಿದ್ದೀರೋ ಗೊತ್ತಿಲ್ಲ. ಇವರು ‘ನ್ಯೂ ಏಜ್ ಗುರು’ ಅಂತಾನೇ ಪ್ರಸಿದ್ಧ. ಮೂಲತಃ ಇವರು ವ್ಯಕ್ತಿತ್ವ ವಿಕಸನ ಪ್ರಚಾರಕ. ಇಷ್ಟೇ ಆಗಿದ್ದರೆ ಇವರ ಬಗ್ಗೆ ಅಂಥ ಕುತೂಹಲ ತಾಳಬೇಕಿರಲಿಲ್ಲ. ಕಾರಣ ನಮ್ಮ ಮಧ್ಯೆ ಇಂಥ ಹಲವಾರು ಮಂದಿ ಇದ್ದಾರೆ. ಎಲ್ಲರೂ ಬದುಕುವ ಕಲೆ ಹೇಗೆ ಎಂದು ಕ್ಲಾಸುಗಳನ್ನು ಸಂಘಟಿಸಿ ಹಣ ಮಾಡುವವರೇ.

ಆದರೆ ರಂಗರಾಜನ್ ಹಾಗಲ್ಲ. ನಮ್ಮಲ್ಲಿರುವ ನಮ್ಮನ್ನು ಹುಡುಕುವುದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. The messenger should be the messageಎಂಬುದು ಅವರ ನಂಬಿಕೆ. ಇವರು ದೇವರು ದಿಂಡರ ಬಗ್ಗೆ ಕೊರೆಯುವುದಿಲ್ಲ. ಬದುಕುವ ಸರಳ ಮಾರ್ಗಗಳನ್ನು ಹೇಳಿಕೊಡುತ್ತಾರೆ. ಇವರ ಮಾತನ್ನು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಇವರ ಮಾತನ್ನು ಕೇಳಿದವರು ‘ವಾಯ್ಸ್ ಆಫ್ ಲವ್್’  ಎಂದು ಹೇಳುವುದುಂಟು. ಆಲ್ಮಾ ಮೇಟರ್ ಎಂಬ ಸಂಸ್ಥೆ ಕಟ್ಟಿಕೊಂಡು ಅವರು ಮಾಡುತ್ತಿರುವ ಕೆಲಸ ಅಸಾಮಾನ್ಯವಾದುದು. ಈ ಪುಸ್ತಕದ ಮೂಲಕ ರಂಗರಾಜನ್ ಅವರು ಮತ್ತಷ್ಟು ಆಪ್ತರಾದರು.

ಪುಸ್ತಕವನ್ನು ಓದಿದ ಬಳಿಕ ನಾನು ಈ ಮನುಷ್ಯನ ಬಗ್ಗೆ ಎಲ್ಲೋ ಓದಿದ್ದೇನಲ್ಲಾ ಎಂದೆನಿಸಿತು. ಕೆಲ ದಿನಗಳ ಹಿಂದೆ ಸ್ನೇಹಿತರೊಬ್ಬರು ಒಂದು ಪುಟ್ಟ ಬರಹವನ್ನು ಇಮೇಲ್ ಮಾಡಿದ್ದರು. ಅದರ ಶೀರ್ಷಿಕೆ(What the world calls failure, I call it a turning point.)  ಆಕರ್ಷಕವಾಗಿತ್ತು. ಆ ಲೇಖನದಲ್ಲಿ ರಂಗರಾಜನ್ ಬರೆದುಕೊಂಡಿದ್ದರು -  ನನಗೆ ಹದಿನೇಳು ವರ್ಷಗಳಾಗಿದ್ದಾಗ ಎಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಪಿಯುಸಿ ಎರಡನೇ ವರ್ಷದಲ್ಲಿ ನನಗೆ ಉತ್ತಮ ಅಂಕ ಬರಲಿಲ್ಲ. ಹೀಗಾಗಿ ಗಣಿತದಲ್ಲಿ ಡಿಗ್ರಿ ಓದಬೇಕಾಯಿತು. ಬರೀ ಇದನ್ನು ಮಾತ್ರ ಓದಿದರೆ ಒಳ್ಳೆಯ ಕೆಲಸ ಸಿಗಲಿಕ್ಕಿಲ್ಲವೆಂದು ಕಂಪ್ಯೂಟರ್ ಸೈನ್ಸ್, ಪ್ರೋಗ್ರಾಮಿಂಗ್ ಓದಿದೆ. ನಾನು ಓದಿದ್ದೇ ಒಂದು, ಆಗಲು ಹೊರಟಿದ್ದೇ ಇನ್ನೊಂದು. ಆದರೇನಂತೆ ನನಗೆ ಇಪ್ಪತ್ತೈದು ವರ್ಷ ಆಗುವ ಹೊತ್ತಿಗೆ ನನ್ನದೇ ಒಂದು ಸಾಫ್ಟ್್ವೇರ್ ಕಂಪನಿ ಆರಂಭಿಸಿದ್ದೆ. ಐವತ್ತಕ್ಕೂ ಹೆಚ್ಚಿನ ಎಂಜಿನಿಯರ್್ಗಳು ನನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹದಿನೇಳನೇ ವಯಸ್ಸಿನಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಇಡೀ ಜಗತ್ತು ನಾನೊಬ್ಬ ನಿಷ್ಪ್ರಯೋಜಕ ಎಂಬ ಹಣೆಪಟ್ಟಿ ಕಟ್ಟಿತ್ತು. ಆದರೆ ನಾನು ಹೊಸ ಸಾಧನೆಗೆ ಭಾಷ್ಯ ಬರೆದಿದ್ದೆ. ಅಲ್ಮಾ ಮೇಟರ್ ಎಂಬ ಸಂಸ್ಥೆಯನ್ನು, ನನಗೆ ಮೂವತ್ತು ವರ್ಷವಾದಾಗ ಸ್ಥಾಪಿಸಿದೆ. ಇದಾದ ಐದು ವರ್ಷಗಳಲ್ಲಿ  ‘ಫ್ರೋಜನ್ ಥಾಟ್ಸ್್’  ಎಂಬ ಮ್ಯಾಗಜಿನ್ ಆರಂಭಿಸಿದೆ.

ಯುಗೊಸ್ಲಾವಿಯಾದ  ಅಗ್ನೇಸ್ ಗೋಂಕ್ಸಾ ಬೊಜೊಕ್ಸಿಯೋ ಕೋಲ್ಕತಾದ ಕಾನ್ವೆಂಟ್ ಸ್ಕೂಲಿನಲ್ಲಿ ಪಾಠ ಮಾಡಲು ಬಂದಳು. ಅವಳು ಬರುವಾಗ ಒಂದು ದಿನ ಇಡೀ ಜಗತ್ತೇ ಹೆಮ್ಮೆಯಿಂದ, ಅಭಿಮಾನದಿಂದ ಕರೆಯುವ ಮದರ್ ತೆರೇಸಾ ಅಗುತ್ತೇನೆಂದು ಅಂದುಕೊಂಡಿರಲಿಲ್ಲ. ಅವಳಿಗೆ ನೊಬೆಲ್ ಪ್ರಶಸ್ತಿಯೂ ಬಂತು. ಜವಾಹರ್್ಲಾಲ್ ನೆಹರು ಆರಂಭಿಸಿದ  ‘ನ್ಯಾಷನಲ್ ಹೆರಾಲ್ಡ್್’ ಪತ್ರಿಕೆಗೆ  ಬಾಲಕೃಷ್ಣ ಮೆನನ್ ಎಂಬುವವರು ಉಪಸಂಪಾದಕನಾಗಿ ಸೇರಿದರು. ಸಾಧು-ಸಂತರೆಂದರೆ ಮಹಾ ಢೋಂಗಿಗಳು ಎಂದು ಅವರು ಭಾವಿಸಿದ್ದರು. ಒಂದು ದಿನ ಈ ಮೆನನ್ ಅವರು ಸ್ವಾಮಿ ಶಿವಾನಂದರನ್ನು ಭೇಟಿಯಾದರು. ಈ ಭೇಟಿ ಸ್ನೇಹಕ್ಕೆ ತಿರುಗಿತು. ಸ್ವಾಮಿ ಶಿವಾನಂದರ ಪ್ರಭಾವದಿಂದ ಬಾಲಕೃಷ್ಣ ಮೆನನ್ ಕೊನೆಗೆ ಸ್ವಾಮಿ ಚಿನ್ಮಯಾನಂದರಾದರು. ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರು ಮತ್ತು ಅನುಯಾಯಿಗಳನ್ನು ಪಡೆದರು. ಚಿನ್ಮಯ ಮಿಷನ್ ಮೂಲಕ ಅಮೋಘವಾದ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. 

ಕ್ರಿಸ್ಟೋಫರ್ ಕೋಲಂಬಸ್ ಮನೆಯಿಂದ ಹೊರಟಾಗ ಮುಂದೊಂದು ದಿನ ತಾನು ಅಮೆರಿಕವನ್ನು ಶೋಧಿಸುತ್ತೇನೆ ಅಂತ ಅಂದುಕೊಂಡಿದ್ದನಾ? ಏನೋ ಆಗಬೇಕೆಂದು ಅಂದುಕೊಂಡು, ಇನ್ನೇನೋ ಆದ. ಅಸಂಖ್ಯ ಜನರ ಸಾಧನೆ ನಮ್ಮ ಕಣ್ಣ ಮುಂದಿದೆ. ಮೊದಲು ವಿಫಲರಾಗಿ, ಲೋಕ ನಿಂದಿತರಾಗಿ, ಜನರ ನಿಂದನೆಗೆ ಪಾತ್ರರಾಗಿ, ಕೇಳಬಾರದ ಬೈಗುಳಗಳನ್ನು ಕೇಳಿಸಿಕೊಂಡು ಕೊನೆಗೆ ಯಾರೂ ಮಾಡದ ಅಸಾಮಾನ್ಯ ಸಾಧನೆ ಮಾಡಿದವರು ಇದ್ದಾರೆ. ಹೀಗಾಗಿ ನೀವು ಅಂದುಕೊಂಡಿದ್ದನ್ನು ಸಾಧಿಸಲು ಆಗದಿದ್ದರೆ, ಜೀವನದ ಆರಂಭದಲ್ಲಿ ನಿಮ್ಮ ಮನೋರಥ ಈಡೇರದಿದ್ದರೆ ಅದಕ್ಕಾಗಿ ಎದೆಗುಂದಬೇಕಿಲ್ಲ, ಜೀವನದಲ್ಲಿ ಜುಗುಪ್ಸೆ ಹೊಂದಿ ಖಿನ್ನರಾಗಬೇಕಿಲ್ಲ. ಅದು ನಿಮ್ಮ ಜೀವನದಲ್ಲಿ ಹೊಸ ಮಾರ್ಗ ಶೋಧನೆಗೆ ಕಾರಣವಾಗಬಹುದು. ನಿಮ್ಮನ್ನು ಹೊಸ ಸಾಹಸಕ್ಕೆ ಅಣಿಗೊಳಿಸಬಹುದು. ಯಾರಿಗೆ ಗೊತ್ತು, ನೀವು ಬಸ್ಸು ತಪ್ಪಿಸಿಕೊಂಡಿದ್ದೇ ಒಳ್ಳೆಯದಾಯಿತು ಅಂತ ನಿಮಗೆ ಅನಿಸಬಹುದು, ನೀವು ಹತ್ತಬೇಕಿದ್ದ ಬಸ್ಸು ಕಮರಿಗೆ ಬಿತ್ತು ಎಂಬ ಸುದ್ದಿ ಕೇಳಿದಾಗ! 

ನಾನು ಆಗಾಗ ಹೇಳುತ್ತಿರುತ್ತೇನೆ, ಅದೇನೆಂದರೆ, ದೇವರು ನಮ್ಮ ಯೋಜನೆಗಳನ್ನು ತಲೆಕೆಳಗು ಮಾಡುತ್ತಿರುತ್ತಾನೆ. ಆಗ ನೀವು ಬೇಸರಿಸಿಕೊಳ್ಳಬಾರದು, ಯಾಕೆಂದರೆ ಆತ ತನ್ನ ಯೋಜನೆಯನ್ನು ಜಾರಿಗೊಳಿಸಲು ಸ್ಕೆಚ್ ಹಾಕಿರುತ್ತಾನೆ.  ಹೀಗಾಗಿ ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು. ನಮ್ಮ ಒಳ್ಳೆಯದಕ್ಕಾಗಿಯೇ ಇವೆಲ್ಲ ಆಗುತ್ತಿದೆಯೆಂದು ಭಾವಿಸಿ, ಸಾಕು. ಎಲ್ಲವೂ ಸರಿ ಹೋಗುತ್ತದೆ.

ನಾನು ಭೇಟಿ ಮಾಡಿದ ಅನೇಕರಲ್ಲಿ ಕಂಡುಕೊಂಡ ಸಂಗತಿಯೇನೆಂದರೆ, ಆ ಪೈಕಿ ಬಹುತೇಕ ಮಂದಿಗೆ ತಮ್ಮ ಮಹತ್ವವೇ ಗೊತ್ತಿಲ್ಲದಿರುವುದು, ತಮ್ಮನ್ನು ಲಘುವಾಗಿ ಪರಿಗಣಿಸುವುದು. ತಾನೇ ಗ್ರೇಟ್ ಎಂದು ಭಾವಿಸಬೇಕು ಅಂತ ನಾನು ಹೇಳುತ್ತಿಲ್ಲ. ಅದು ಅಹಂಕಾರ. ಆದರೆ ಈ ಕೆಲಸ ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಸಹ ಅವರಲ್ಲಿ ಇರುವುದಿಲ್ಲ. ಮನಸ್ಸು ಮಾಡಿದರೆ ಅವರಿಗೆ ಆಗದ ಕೆಲಸವೇನೂ ಅಲ್ಲ. ಆದರೂ ಮನಸ್ಸು ಮಾಡುವುದಿಲ್ಲ.

‘ಜೀವನದಲ್ಲಿ ಸರ್ವಸ್ವವೂ ನಾಶವಾಗಿ ಹೋಯಿತು. ನನಗೆ ಆತ್ಮಹತ್ಯೆಯೊಂದೇ ಪರಿಹಾರ’ ಎಂದು ಕೆಲವರು ಹೇಳುತ್ತಾ ಬರುತ್ತಾರೆ. ಸರ್ವಸ್ವವೂ ನಾಶವಾದ ಬಳಿಕ, ಹೊಸದಾಗಿ ಜೀವನ ರೂಪಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ’ ಎಂದು ಯಾರೂ ಯೋಚಿಸುವುದಿಲ್ಲ. ಹಾಗೆ ನೋಡಿದರೆ ಮನುಷ್ಯನ ಅಸ್ತಿತ್ವವಿರುವುದೇ ಕಟ್ಟುವುದರಲ್ಲಿ. ನೀವು ಒಂದು ನೂರು ಕೋಟಿ ರುಪಾಯಿ ಗಳಿಸಿದ್ದೀರೆನ್ನಿ. ಅವೆಲ್ಲವೂ ನಿಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಕಳೆದು ಹೋಯಿತೆನ್ನಿ, ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು ಎಂದಲ್ಲ. ಅಲ್ಲಿಂದ ಆರಂಭಿಸುತ್ತೀರಲ್ಲ, ಪುನಃ ಕಟ್ಟಬೇಕೆಂದು ಸಂಕಲ್ಪ ತೊಡುತ್ತೀರಲ್ಲ, ಅದು ಬಹಳ ಮುಖ್ಯ. ಈ ಗುಣವೇ ನಮ್ಮನ್ನು ಪೊರೆಯುವುದು. ಇದರಿಂದ ಕಳೆದುಕೊಂಡ ನೂರು ಕೋಟಿ ರುಪಾಯಿಯನ್ನು ಪುನಃ ಸಂಪಾದಿಸಬಹುದು. ನನ್ನ ಮುಂದೆಯೇ ಇದನ್ನು ಮಾಡಿ ತೋರಿಸಿದ ಹಲವಾರು ಮಂದಿಯಿದ್ದಾರೆ. ನಿಮಗೆ ನೂರು ಕೋಟಿ ರುಪಾಯಿ ಗಳಿಸುವುದು ಗೊತ್ತಿದೆ ಅಂದ್ರೆ, ಅದನ್ನು ಕಳೆದುಕೊಂಡ ಬಳಿಕ, ಪುನಃ ಸಂಪಾದಿಸುವುದು ಸಹ ಗೊತ್ತಿದೆ ಎಂದೇ ಅರ್ಥ. ಆದರೆ ಮೊದಲು ಗಳಿಸಿದ್ದು ವಾಮಮಾರ್ಗದಿಂದಾರೆ ಮಾತ್ರ, ಪುನಃ ಗಳಿಸುವುದಕ್ಕೆ ನೀವು ಹಿಂದೇಟು ಹಾಕುತ್ತೀರಿ.

our most precious resource is yourself. Are you using yourself enough?ಈ ಪ್ರಶ್ನೆಯನ್ನು ಎಲ್ಲರಿಗೂ ಕೇಳುತ್ತೇನೆ. ಎಲ್ಲರೂ ಈ ಪ್ರಶ್ನೆಗೆ ವಿಚಿತ್ರವಾಗಿಯೇ ಉತ್ತರಿಸುತ್ತಾರೆ. ಯಾರೂ ಆತ್ಮವಿಶ್ವಾಸಭರಿತರಾಗಿ ‘ಹೂಂ’ ಅನ್ನುವುದಿಲ್ಲ. ಅವರ ಬಗ್ಗೆ ಅವರಿಗೆ ಅಂಥ ವಿಶ್ವಾಸ!?

ನಿಮಗೆ ಗೊತ್ತಿರಬಹುದು. 1960ರಲ್ಲಿ ಜಪಾನ್ ಸ್ಟೀಲನ್ನು ಉತ್ಪಾದಿಸಲು ನಿರ್ಧರಿಸಿತು. ಸ್ಟೀಲ್ ತಯಾರಿಕೆ ಮೂಲಭೂತವಾಗಿ ಎರಡು ಕಚ್ಚಾ ವಸ್ತುಗಳು ಬೇಕು- ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು. ವಿಚಿತ್ರವೆಂದರೆ ಈ ಎರಡೂ ವಸ್ತುಗಳು ಜಪಾನ್್ನಲ್ಲಿ ಸಿಗುವುದಿಲ್ಲ. ಆದರೆ ಜಪಾನ್್ಗೆ ಇವೆರಡನ್ನು ಎಲ್ಲಿಂದ ಪಡೆಯಬಹುದೆಂಬುದು ಗೊತ್ತಿತ್ತು. ಹೀಗಾಗಿ ಇವೆರಡು ಅಗ್ದಿ ಕಡಿಮೆ ಬೆಲೆಗೆ ಧಾರಾಳವಾಗಿ ಸಿಗುವ ದೇಶದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿತು. ಇದಕ್ಕೆ ಪ್ರತಿಯಾಗಿ ಬೇಡಿಕೆ ಅಧಿಕವಾಗಿರುವ ದೇಶಗಳಿಗೆ ಸ್ಟೀಲನ್ನು ರಫ್ತು ಮಾಡಲು ತೀರ್ಮಾನಿಸಿತು. ಎಂಥ ಸೋಜಿಗವೆನ್ನಿ. ಒಂದು ಕಾಲಕ್ಕೆ ಜಪಾನ್ ಜಗತ್ತಿನಲ್ಲಿ ಸ್ಟೀಲ್ ಉತ್ಪಾದಿಸುವ ದೇಶಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆಯಿತು. ಅದಾಗಿ ಬರೀ ಎರಡು ದಶಕಗಳ ಅವಧಿಯಲ್ಲಿ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಯಿತು. ಕಬ್ಬಿಣದ ಅದಿರೂ ಇರಲಿಲ್ಲ. ಕಲ್ಲಿದ್ದಲೂ ಇರಲಿಲ್ಲ. ಇದ್ದಿದ್ದು ಬುದ್ಧಿಮತ್ತೆ ಹಾಗೂ ಈಡೇರಿಸುವ ಛಲ.

ಏನೂ ಇಲ್ಲದಿದ್ದರೂ ಜಪಾನ್ ಅಗಾಧವಾದುದನ್ನು ಸಾಧಿಸಿತು. ಒಂದು ಸಂಗತಿ ಗೊತ್ತಿರಲಿ, ನೀವು ಯಾವುದೋ ಹೊಸ ದಂಧೆ, ವ್ಯಾಪಾರ ಮಾಡಲು ನಿಂತಿದ್ದೀರಿ ಎನ್ನಿ. ತಕ್ಷಣ ನಿಮಗೆ ಎದುರಾಗುವ ಪ್ರಶ್ನೆಯೆಂದರೆ ಅಷ್ಟೊಂದು ಹಣವನ್ನು ಎಲ್ಲಿಂದ ತರೋದು? ಆದರೆ ಆಗ ನಿಮಗೆ ನಿಮ್ಮ ನೆನಪೇ ಆಗುವುದಿಲ್ಲ. ನಿಮ್ಮಂಥ ದೊಡ್ಡ ಸಂಪನ್ಮೂಲ ಮತ್ತೊಂದಿಲ್ಲ ಎಂಬ ಸರಳ ಸಂಗತಿ ನಿಮ್ಮ ಅರಿವಿಗೆ ಬರುವುದಿಲ್ಲ. ಬರೀ ಹಣದ ಬಗ್ಗೆ ಅಷ್ಟೇ ಯೋಚಿಸುತ್ತೀರುತ್ತೀರಿ.
ಜೀವನದಲ್ಲಿ ನಿಮ್ಮನ್ನು ಯಾರೂ ಇಷ್ಟಪಡದಿರಬಹುದು. ಬೇರೆ ಎಲ್ಲರೂ ನಿಮ್ಮನ್ನು ನಂಬದಿರಬಹುದು, ಆದರೆ ನೀವು ನಂಬಲೇಬೇಕು. ಜಗತ್ತು ನಿಮ್ಮನ್ನು ಹೇಗೆಯೇ ನೋಡಲಿ ಅದರಿಂದ ನಿಮಗೆ ಹೆಚ್ಚು ಫರಕ್ಕು ಬೀಳುವುದಿಲ್ಲ. ಆದರೆ ಅದೇ ನೀವು ನಿಮ್ಮನ್ನು ಹೇಗೆ ನೋಡುತ್ತೀರಿ ಎಂಬ ಸಂಗತಿ ನಿಮ್ಮಲ್ಲಿ ಅಗಾಧ ಪರಿಣಾಮ ಹಾಗೂ ವ್ಯತ್ಯಾಸವನ್ನುಂಟು ಮಾಡುತ್ತದೆ.

‘ನನ್ನ ತಾಯಿ ನನ್ನನ್ನು ಭೌತವಿಜ್ಞಾನಿಯನ್ನಾಗಿ ಮಾಡಿದಳು’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಐಸಿಡೋರ್ ಐಸಾಕ್ ರಬಿ ಹೇಳಿದ್ದಾನೆ. ‘ಎಲ್ಲ ತಾಯಂದಿರೂ ಅವರವರ ಮಕ್ಕಳಿಗೆ ಇಂದು ಹೊಸತೇನನ್ನು ಕಲಿತೆ?’ ಎಂದು ಕೇಳುತ್ತಿದ್ದರು. ಆದರೆ ನನ್ನ ತಾಯಿ ಪ್ರತಿದಿನ ‘ಇಂದು ಸ್ಕೂಲಿನಲ್ಲಿ ಒಳ್ಳೆಯ ಪ್ರಶ್ನೆ ಕೇಳಿದೆ ತಾನೆ?’ ಎಂದು ಕೇಳುತ್ತಿದ್ದಳು. ಇದೇ ನನ್ನನ್ನು ವಿಜ್ಞಾನಿಯನ್ನಾಗಿ ಮಾಡಿತು ಎಂದು ರಬಿ ಹೇಳಿದ್ದಾನೆ. ಎಂಥ ವ್ಯತ್ಯಾಸ?!

ಬದುಕು ನಾವು ಅಂದುಕೊಂಡಷ್ಟು ಕಷ್ಟವಾಗಿಲ್ಲ. ಆದರೆ ನಾವು ಅಂದುಕೊಂಡಿದ್ದಕ್ಕಿಂತ ಸರಳವಾಗಿದೆ, ಸುಲಭವಾಗಿದೆ.

ಇದನ್ನು ನೀವೇ ಅನುಭವಿಸಬೇಕು.

21 Comments

  1. ಧನ್ಯವಾದಗಳು ಭಟ್ಟರೇ…
    .ಅದ್ಭುತವಾದ ಅನುಭವವಾಯಿತು….. ಎಲ್ಲಾ ಮುಗಿದೇ ಹೋಯಿತು ಎಂದು ಹಲುಬುವ ಸಾಕಷ್ಟು ಜನರಿಗೆ… ಇನ್ನೆಲ್ಲೋ ಶುರುವಾಗಬಹುದೆಂಬ ಆಶಯವೇ ಇರುವುದಿಲ್ಲ…. ಇದನ್ನೊಮ್ಮೆ ಓದಿ ಮನನ ಮಾಡಿಕೊಂಡರೆ… ಬದುಕುವ, ಯೋಚಿಸುವ ರೀತಿಯೇ ಬದಲಾಗಬಹುದು

  2. Nice one sir…

  3. Without GOD,
    I cannot .

    Without me,
    GOD will not.

    GOD plus me
    anything is possible.

    –t.t.Ranga rajan.
    From the book–unposted letter.

    Nice thoughts……
    Thanks for sharing….
    ” Excited to be alive….”
    Veena.

  4. Very nice and motivational article sir, please tell the name of the book

  5. Yes, I needed this. Thank u so much for sharing sir.

  6. good article sir.. But that is not unspotted letter sir…that book’s name is unposted letter (came to know from google) and i too excited to read that book…!!!

  7. Thankue sir…
    Actually i didnt score better in 1st sem of BE,i felt very bad! When i read your article ,now i change my path and i’ll definitly reach my destination

  8. I just saw law of attraction movie in the morning and reading this article before going to bed. What a way to start and end a day :)

  9. Very fine. Thanks sir

  10. ತುಂಬಾ ಚೆನ್ನಾಗಿದೆ ಸಾರ್.

  11. THANK YOU BHATTARE……. for an inspiring article…….
    mine too was the same case as Sangamesh….. but dis semister my first internal marks are good and i hope i will do my in sem exams also……

  12. super article sir…
    started reading your articles on this site and suvarna news site…your articles inspire me a lot..i even ask my friends to read your articles…:)

  13. Dear Sir,

    Thank You very much for Extraordinary Article. The article indicates the Value of ” Yes we can ” attitude at all the points of time in life.

    Thank you so Much for giving a very Good Article.

  14. Thank you for the wonderful article sir

  15. A nice article sir.. Keep cheering readers..

  16. Good one sir…. nice to read before starting any day…..

  17. sir me reading this article is too late today 12-4-12, but ur words ll covering inspiration of my willings, confidense. its so mind catching article.

  18. Sir,

    Adbhutavaada lekhana.. Ee lekhana odida mele iDee pustakavanne odidanthaayithu. tamage naanu bahaLa aabhaariyaagiddene.

    tamma melina preeti, gourava innashtu hechhaayitu. Shubhavaagali :)

  19. Inspirational topic.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.