ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ತಪ್ಪಾಯ್ತು ತಿದ್ಕೋತೀವಿ’

  • ವಿದ್ಯುದ್ದೀಪ’ ಎಂಬುದು ಸರಿಯಾದ ಬಳಕೆ ಎಂಬುದು ಖಚಿತವಿತ್ತು. ಆದರೆ ಯಾವ ಸಂಧಿ ?

    ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಜ.22ರಂದು ಮುಖಪುಟದಲ್ಲಿ ‘ಪಾಕೋಪಕಾರಿ’ ಎಂಬ ಶೀರ್ಷಿಕೆ ಕಂಡು ಸ್ಪಂದಿಸಬೇಕೆನಿಸಿತು. ಪಾಕ್‌ ಕಾರಿ ಪಾಕೋಪಕಾರಿ. ಇಲ್ಲಿ ಯಾವ ಪಾಕ ಎಂಬ ಪ್ರಶ್ನೆ ಮೂಡುತ್ತದೆ. ‘ಪಾಕುಪಕಾರಿ’ ಎಂದಿರಬೇಕಿತ್ತು. ಪಾಕ್‌ ಉಪಕಾರಿಪಾಕುಪಕಾರಿ ಎಂದಾಗಬೇಕಿತ್ತು.’
    ‘ಅದೇ ದಿನದ ಸಂಚಿಕೆಯಲ್ಲಿ ‘ನಿಜ ವ್ಯಾಖ್ಯಾನ’ (ಗೋಪಾಲಕೃಷ್ಣ ಕೆ.ಸಿ.) ಲೇಖನದಲ್ಲಿ ‘ನ್ಯೂನ್ಯತೆ’ ಎಂಬ ಪದವನ್ನು ಮತ್ತೆಮತ್ತೆ ಬಳಸಿದ್ದಾರೆ. ಇದು ಸರಿಯಲ್ಲ. ‘ನ್ಯೂನತೆ’ ಎಂಬುದು ಶುದ್ಧರೂಪ.’
    ‘ಜ.23ರ ಸಂಚಿಕೆಯ ‘ತಪ್ಪಾಯ್ತು ತಿದ್ಕೋತೀವಿ’ ಅಂಕಣದಲ್ಲಿ ವಿದ್ಯುತ್ ದೀಪ ಗೊಂದಲದ ಬಗೆಗೆ ಅಕಣದ ನಿರ್ವಾಹಕರೇ ‘ವಿದ್ಯುದ್ದೀಪ’ವು [...]

  • ಈ ಶೀರ್ಷಿಕೆ ಕೊಟ್ಟಿದ್ದರೆ ಹೆಚ್ಚು ಸೂಕ್ತ ಎಂದೆನಿಸುತ್ತಿತ್ತು !

    ತಪ್ಪಾಯ್ತು ತಿದ್ಕೋತೀವಿ
    ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- ‘ಜ.21ರ ಪತ್ರಿಕೆಯ ಪುಟ 4ರಲ್ಲಿ ಮಂಡ್ಯ ಸುದ್ದಿ ವಿಭಾಗದಲ್ಲಿ ‘ಶ್ರೀರಂಗಪಟ್ಟಣ ತಹಸೀಲ್ದಾರರಿಂದ ಪೋಲಿಯೋ ಲಸಿಕೆ’ ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ. ಈ ವರದಿಗೆ ಪೂರಕವಾಗಿ ಫೋಟೊ ಕೂಡ ಪ್ರಕಟವಾಗಿದ್ದು, ಅದರಡಿ ‘ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ತಹಸೀಲ್ದಾರ್ ಅರುಳ್‌ಕುಮಾರ್ ಪುತ್ರ ಲೌಕಿಕ್ ಅಶ್ವತ್ಥ್‌ಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು’ ಎಂಬ ವಾಕ್ಯ ಕೂಡ ಇದೆ. ಇದರಲ್ಲಿ ತಪ್ಪಾಗಿರುವುದೇನೆಂದರೆ ‘ಶ್ರೀರಂಗಪಟ್ಟಣದಲ್ಲಿ ತಹಸೀಲ್ದಾರರಿಂದ ಪೋಲಿಯೋ ಲಸಿಕೆ’ [...]

  • ಪದಗಳ ಜೋಡಣೆಯಲ್ಲಿ ಗೊಂದಲವಿದೆ, ಇದನ್ನು ಯಾಕೆ ಗಮನಿಸಲಿಲ್ಲ?

    ತಪ್ಪಾಯ್ತು ತಿದ್ಕೋತೀವಿ
    ಬೆಂಗಳೂರಿನಿಂದ ರವಿಕುಮಾರ ಜಿ.ಬಿ. ಅವರು ಪತ್ರ ಬರೆದಿದ್ದಾರೆ. ವಿಶೇಷವೆಂದರೆ ರವಿಕುಮಾರ ಅವರು ಕಲಿತಿದ್ದು ಕೇವಲ 3ನೇ ತರಗತಿವರೆಗಂತೆ. ಆದರೂ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಿರುವುದು ವಿಶೇಷ. ಸಾಕಷ್ಟು ಕಲಿತವರಲ್ಲಿ ಎಷ್ಟೋ ಜನಕ್ಕೆ ಪತ್ರಿಕೆ ಓದುವ ರೂಢಿ ಇರುವುದಿಲ್ಲ. ಇದರ ನಡುವೆಯೂ ರವಿಕುಮಾರ ಅವರು ಪತ್ರ ಬರೆದಿರುವುದು ನಿಜಕ್ಕೂ ಸಂತೋಷದ ಸಂಗತಿ. ಅವರು ಬರೆಯುತ್ತಾರೆ-
    ‘ಈ ಅಂಕಣಕ್ಕೆ ನಾನು ಮೊದಲಬಾರಿಗೆ ಪತ್ರ ಬರೆಯುತ್ತಿದ್ದೇನೆ. ಪತ್ರಿಕೆಯಲ್ಲಿ ತಪ್ಪುಗಳು ಕಾಣುತ್ತವೆ. ಆದರೆ ಪತ್ರಬರೆಯಲು ಅಂಜಿಕೆ. ನನಗೆ ಸರಿಯಾಗಿ ಬರೆಯಲು ಬರುವುದಿಲ್ಲ. ತಪ್ಪು [...]

  • ನಿಮ್ಮ ಪತ್ರಿಕೆ ಕೇವಲ ‘ಅಮೂಲ್ ಬೇಬಿ’ಗೆ ಸೀಮಿತವಾಗದಿರಲಿ

    ತಪ್ಪಾಯ್ತು ತಿದ್ಕೋತೀವಿ
    ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಹೇಮಲತಾ ಮುರಳಿ ಮಿಂಚಂಚೆ ಕಳುಹಿಸಿದ್ದಾರೆ. ‘ಜ.9 ಮುಖಪುಟದಲ್ಲಿ ‘ಕಾಮುಕ ತಂದೆಯ ಪಾಶವೀ ಕೃತ್ಯ’ ಸುದ್ದಿಯಲ್ಲಿ ‘ಆರೋಪಿ ತನ್ನಿಬ್ಬರು ಹಣ್ಣು ಮಕ್ಕಳು ಹಾಗೂ 3 ಗಂಡುಮಕ್ಕಳನ್ನು ಕರೆದುಕೊಂಡು ಬಂದರು’ ಎಂದಿದೆ. ಅದು ಹಣ್ಣು ಮಕ್ಕಳಲ್ಲ, ಹೆಣ್ಣು ಮಕ್ಕಳು ಆಗ್ಬೇಕು. ಅಥವಾ ಈ ಕೆಲವು ದುರಾತ್ಮರಿಂದ ಹೆಣ್ಣು ಮಕ್ಕಳು ಹಣ್ಣಾಗಿರುವುದನ್ನು ಈ ರೀತಿ ಪರೋಕ್ಷವಾಗಿ ಸೂಚಿಸಿರುವ ಹಾಗೆಯೂ ಅರ್ಥೈಸಿಕೊಳ್ಳಬೇಕಾಗಿಯೂ ಇದೆ. ಆದರೆ ದೋಷ ಎಂದಿಗೂ ದೋಷವೇ’ ಎಂದಿದ್ದಾರೆ.
    ಚಿತ್ರದುರ್ಗದಿಂದ ನಳಿನಿ ನಾಗೇಶ ಅವರು ದೂರವಾಣಿ ಕರೆ [...]

  • ಓದುಗರು ತಪ್ಪು ಗುರುತಿಸುವಲ್ಲೇ ತಪ್ಪು ಮಾಡಿದರೆ ಕಷ್ಟ !

    ತಪ್ಪಾಯ್ತು ತಿದ್ಕೋತೀವಿ
    ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಎನ್.ಜಿ. ವೇಣುಗೋಪಾಲ ಅವರು ಬರೆಯುತ್ತಾರೆ- ‘ಜ.4ರ ಪತ್ರಿಕೆಯ ‘ತಪ್ಪಾಯ್ತು ತಿದ್ಕೋತೀವಿ’ ಅಂಕಣದಲ್ಲಿ ತಪ್ಪು ಮಾಡದೇ ತಾವು ತಪ್ಪೊಪ್ಪಿಕೊಂಡಿದ್ದೀರಿ. ನಾನು ಡಿ.16ರ ಪತ್ರಿಕೆಯಲ್ಲಿನ ‘ಅಮೆರಿಕದ ಶಾಲೆಯಲ್ಲಿನ ಶೂಟೌಟ್್ಗೆ ಸಂಬಂಧಿಸಿದ ಫೋಟೊ ಅಡಿಬರಹದಲ್ಲಿ ಇರುವ ‘ರೋಧಿಸುತ್ತಿರುವ’ ಪದದಲ್ಲಿ ‘ದಿ’ ಮಹಾಪ್ರಾಣವಿರಬೇಕು ಎಂದು ಬರೆದಿದ್ದಕ್ಕೆ, ಆ ಪದವೇ ಸರಿಯಾದ ಬಳಕೆ, ಅದು ಮಹಾಪ್ರಾಣವಲ್ಲ ಎಂದು ತಿಳಿಸಿದ್ದೀರಿ.’
    ‘ಆದರೆ, ನಾಗೇಂದ್ರ ಎಂ. ಭಟ್ ಅವರು ಆ ಪದವನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅದೇ ದಿನದ ಪತ್ರಿಕೆಯಲ್ಲಿನ (ಜ.3) ‘ಮಹಿಳೆಯರ ಪರ [...]

  • ಆದರೆ ಎಲ್ಲಿಯ ಕಾಪುಸಿ, ಎಲ್ಲಿಯ ಶೆಟ್ಟರ್ !

    ತಪ್ಪಾಯ್ತು ತಿದ್ಕೋತೀವಿ
    ಮೈಸೂರಿನ ಜೆ.ಪಿ.ನಗರದಿಂದ ಬ್ಯಾಂಕ್ ಶಿವಕುಮಾರ ಅವರು ಹಲವು ತಿಂಗಳುಗಳ ನಂತರ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- ‘ಜ.8ರಂದು (ಪುಟ 4 ಚಾಮರಾಜನಗರ ಆವೃತ್ತಿ) ನಿಮ್ಮ ವರದಿಗಾರರು ಒಂದು ಸಣ್ಣ ತಪ್ಪಲ್ಲ. ಬಹಳ ದೊಡ್ಡ ತಪ್ಪನ್ನೇಮಾಡಿದ್ದಾರೆ.
    ವರದಿಯ ಸಾರಾಂಶ ಹೀಗಿದೆ… ‘ಸಣ್ಣವರ ಟೀಕೆಗೆ ಉತ್ತರಿಸಲ್ಲ: ಕಾಪುಸಿ’ ಶೀರ್ಷಿಕೆ ಅಡಿಯಲ್ಲಿ ಮಾನ್ಯ ಕಾಪುಸಿಯವರು ಜ.9ರಂದು ಮುಖ್ಯಮಂತ್ರಿ ಶೆಟ್ಟರ್ ಅವರು ಜಿಲ್ಲೆಗೆ ಭೇಟಿನೀಡುವ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಕ್ರಮಗಳ ಪರಿಶೀಲನೆಗಾಗಿ ಚಾಮರಾಜನಗರಕ್ಕೆ ಆಗಮಿಸಿರುವ ಅವರು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ [...]

  • ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು’ ಎನ್ನಬಹುದಲ್ಲವಾ?

    ತಪ್ಪಾಯ್ತು ತಿದ್ಕೋತೀವಿ
    ಯಾದಗಿರಿಯಿಂದ ಮಾರುತಿ ಕುಲಕರ್ಣಿ ಮಿಂಚಂಚೆ ಕಳುಹಿಸಿದ್ದಾರೆ.
    ‘ಓದುಗರು ಪತ್ರಿಕೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವಲ್ಲಿ ‘ತಪ್ಪಾಯ್ತು ತಿದ್ಕೋತೀವಿ’ ಅಂಕಣ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಕೇವಲ ಅಕ್ಷರ, ಪದ, ಸಂಖ್ಯೆಗಳ ತಪ್ಪು ಮುದ್ರಣದ ವರದಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಸ್ವಾರಸ್ಯವನ್ನು ರುಚಿಕಟ್ಟಾಗಿ ಉಣಬಡಿಸುವಲ್ಲಿ ಯಶಸ್ವಿಯಾಗಿರುವುದು ‘ತಪ್ಪಾಯ್ತು ತಿದ್ಕೋತೀವಿ’ ಅಂಕಣದ ಹೆಗ್ಗಳಿಕೆ.’
    ‘ನ.30ರ 8ನೇ ಪುಟದಲ್ಲಿ(ಬೆಂಗಳೂರು ಆವೃತ್ತಿಯಲ್ಲಿ ಪುಟ 10) ‘ಕೆಪಿಸಿಸಿ ಪರೀಕ್ಷೆಗೆ ಹಸಿರು ನಿಶಾನೆ’ ಎಂಬ ಶೀರ್ಷಿಕೆ ಬಂದಿದೆ. ಅದು ‘ಕೆಪಿಎಸ್್ಸಿ ಪರೀಕ್ಷೆಗೆ ಹಸಿರು ನಿಶಾನೆ’ [...]

  • ಇದು ‘ಶತಮಾನೋತ್ಸವ’ ಅಲ್ಲ, ‘ಶತಮಾಸೋತ್ಸವ’

    ತಪ್ಪಾಯ್ತು ತಿದ್ಕೋತೀವಿ
    ಎನ್.ಜಿ.ವೇಣುಗೋಪಾಲ್ ಅವರ ಪತ್ರದ ಮುಂದುವರಿದ ಭಾಗ-
    ‘ನವೆಂಬರ್ 5ರ ಪುಟ 5ರಲ್ಲಿ ಎಡಗಡೆಯ ವರದಿಯ ಕೊನೆಯ ಸಾಲಿನಲ್ಲಿ ‘ಅರವಿಂಬ ಲಿಂಬಾವಳಿ’ ಎಂದಿದೆ. ಆದರೆ ಅದು ‘ಅರವಿಂದ ಲಿಂಬಾವಳಿ’ ಎಂದಾಗಬೇಕಿತ್ತು. ಇದೇ ರೀತಿ ಪುಟ 7ರ ಸುದ್ದಿಯೊಂದರಲ್ಲಿ ‘ವಿಶ್ವೇಶ್ವರ ತೀರ್ಥ ಸ್ವಾಮೀಜಿ’ ಎಂದಿದೆ. ಇದು ‘ವಿಶ್ವೇಶತೀರ್ಥ ಸ್ವಾಮೀಜಿ’ ಎಂದಿರಬೇಕು. ಇನ್ನು ಅದೇ ಪುಟದಲ್ಲಿ ‘ಗುಲ್ಬರ್ಗಾ ವೈದ್ಯ ಕಾಲೇಜು ಸ್ಥಾಪನೆಗೆ ನಿರ್ಲಕ್ಷ್ಯ’ ಶೀರ್ಷಿಕೆಯಡಿ ’550 ಹಾಸುಗೆಗಳ ಆಸ್ಪತ್ರೆ’ ಎಂದಿದೆ. ಇದು ’550 ಹಾಸಿಗೆಗಳ ಆಸ್ಪತ್ರೆ’ ಎಂದಿರಬೇಕು.’
    ‘ಪುಟ 9ರ ‘ಹಿರಿಯರ ಹಾದಿ’ [...]

  • ವೃದ್ಧೆ ಸರ ಅಪಹರಣ’ ಎಂಬ ಶೀರ್ಷಿಕೆ ಬದಲು ‘ವೃದ್ಧೆಗೆ ಮೋಸ’ ಎಂಬ ಶೀರ್ಷಿಕೆ ಸೂಕ್ತ

    ಹಾಸನದಿಂದ ರಶ್ಮಿ ಗೌಡ ಅವರು ಬರೆಯುತ್ತಾರೆ- ‘ನ.4ರಂದು ಪತ್ರಿಕೆಯ 4ನೇ ಪುಟದಲ್ಲಿ ಕೆಲವು ತಪ್ಪುಗಳು ನನ್ನ ಗಮನಕ್ಕೆ ಬಂದಿವೆ. ಎರಡು ಸುದ್ದಿಗಳು ಅಪೂರ್ಣವಾಗಿವೆ. ಪುಟದ ಮೇಲ್ಭಾಗದಲ್ಲಿ ‘ನಿಗದಿತ ಸ್ಥಳದಲ್ಲೇ ಕಾಫಿ ತ್ಯಾಜ್ಯ ವಿಸರ್ಜನೆಗೆ ಸೂಚನೆ’ ಎಂಬ ಸುದ್ದಿಯಲ್ಲಿ ‘ಹೆಚ್ಚಿನ ಮಾಹಿತಿಗೆ ಬಸವರಾಜು, ಪರಿಸರ ಅಧಿಕಾರಿ’ ಎಂದು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ‘ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆ’ ಸುದ್ದಿಯಲ್ಲಿ ‘ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲು’ ಎಂದು ಅಪೂರ್ಣವಾಗಿದೆ.’
    ‘ಪೊಲೀಸ್ ಸರ್ಕಲ್ ವಿಭಾಗದಲ್ಲಿ ‘ವೃದ್ಧೆ ಸರ ಅಪಹರಣ’ ಎಂಬ ಸುದ್ದಿಯಿದೆ. [...]

  • ಟಿಪ್ಪು ತಾನೇ ರಾಜನೆಂದು ಘೋಷಿಸಿಕೊಂಡ’ ಎಂದು ತಪ್ಪಾಗಿ ಬರೆಯಲಾಗಿದೆ

    ಬಳ್ಳಾರಿಯಿಂದ ವಕೀಲ ಡಿ.ಅಬ್ದುಲ್ ಸುಭಾನ್ ಅವರು ಪತ್ರ ಬರೆದು ‘ತಪ್ಪಾಗಿದೆ ತಿದ್ದುಕೊಳ್ಳಿ’ ಎಂದು ಫರ್ಮಾನು ಹೊರಡಿಸಿದ್ದಾರೆ.
    ‘ಅಕ್ಟೋಬರ್ 21ರ ಸಾಪ್ತಾಹಿಕ ಪ್ರಭದ 6ನೇ ಪುಟದಲ್ಲಿ ‘ಎರಡು ಸಲ ಪೀಠ ವಂಚಿತ’ ಎಂಬ ಸುದ್ದಿ ಪ್ರಕಟವಾಗಿದೆ. ’1782ರಲ್ಲಿ ಟಿಪ್ಪು ತಾನೇ ರಾಜನೆಂದು ಘೋಷಿಸಿಕೊಂಡ’ ಎಂದು ತಪ್ಪಾಗಿ ಬರೆಯಲಾಗಿದೆ’ ಎಂದು ಇತಿಹಾಸದ ಕೆಲ ಘಟನೆಗಳನ್ನು, ಅವರ ಇತಿಹಾಸದ ಪರಿಜ್ಞಾನದಿಂದ ಬರೆದು ಕಳುಹಿಸಿದ್ದಾರೆ.
    1730: ಮೈಸೂರು ಒಡೆಯರ ಸೈನ್ಯವನ್ನು ಹೈದರಾಲಿ ಸೇರಿ 1735ರಲ್ಲಿ ಸೇನಾಧಿಪತಿಯಾದರು.
    1740: ಪಾಳೇಗಾರರನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ಒಡೆಯರ ವಂಶಕ್ಕೆ ಸಲ್ಲಿಸಿದರು, ರಾಜರು [...]