ಅಂಕಣ: ‘ನೂರೆಂಟು ಮಾತು’
-
ಅಂದು ಆಡ್ವಾಣಿಯವರ ಶ್ರೀರಕ್ಷೆ ಇರದಿದ್ದರೆ ಇಂದು ಮೋದಿ ಎಲ್ಲಿರುತ್ತಿದ್ದರು?
ಇಂಥದೊಂದು ಸಂದರ್ಭ ಮುಂದೊಮ್ಮೆ ತಮ್ಮ ಜೀವನದಲ್ಲಿ ಎದುರಾಗಬಹುದು ಎಂದು ಸ್ವತಃ ಎಲ್.ಕೆ. ಆಡ್ವಾಣಿ ಅವರು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಕ್ಕಿಲ್ಲ. ತಾವೇ ಕಟ್ಟಿದ ಭಾರತೀಯ ಜನತಾ ಪಕ್ಷದ ಎಲ್ಲ ಹುದ್ದೆ, ಹೊಣೆಗಾರಿಕೆಗಳಿಗೆ ರಾಜಿನಾಮೆ ಕೊಟ್ಟು ‘ಸರ್ವಸಂಗ ಪರಿತ್ಯಾಗಿ’ ಆಗಿಬಿಟ್ಟರು. ಬೇರೆ ಯಾರಾದರೂ ಇಂಥ ನಿರ್ಧಾರ ಕೈಗೊಂಡಿದ್ದರೆ ಅಂಥ ಅಚ್ಚರಿ, ಆತಂಕ, ಆಘಾತ ಆಗುತ್ತಿರಲಿಲ್ಲ. ಆದರೆ ಇಡೀ ಬದುಕನ್ನೇ ಒಂದು ಪಕ್ಷ, ಅದರ ಸಂರಚನೆ, ಸಂಸ್ಥಾಪನೆ ಹಾಗೂ ಏಳಿಗೆಗಾಗಿ ಮುಡಿಪಾಗಿಟ್ಟವರು, ಆ ಪಕ್ಷದೊಂದಿಗೆ ತಮ್ಮ ವ್ಯಕ್ತಿತ್ವ, ಜೀವನವನ್ನು ರೂಪಿಸಿಕೊಂಡವರು, ಪಕ್ಷದ ಜವಾಬ್ದಾರಿ [...]
-
ವದಂತಿ ಅಂದ್ರೆ ಎಂಥಾ ಮಜಾ ಎಂಬುದು ಅನುಭವಿಸಿದವರಿಗೇ ಗೊತ್ತು!
‘Journalism is organized gossips’
ಹಾಗಂತ ಹೇಳಿದವನು ಅಮೆರಿಕದ ಖ್ಯಾತ ಇತಿಹಾಸಕಾರ ಮತ್ತು ಕಾದಂಬರಿಕಾರ ಎಡ್ವರ್ಡ್ ಈಗಲ್ಸ್ಟನ್. ಈ ಮಾತನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಆದರೆ ಪತ್ರಕರ್ತರಿದ್ದಾರಲ್ಲ, ಅವರು ಮಾತ್ರ ಮಹಾನ್ ವದಂತಿಪ್ರಿಯರು, ಗಾಸಿಪ್ ದಾಸರು.. ಎಷ್ಟು ವದಂತಿಪ್ರಿಯರೆಂದರೆ ಅವರು ವದಂತಿಯನ್ನು ಕೇಳುವುದಷ್ಟೇ ಅಲ್ಲ, ಅದನ್ನೇ ಉಸಿರಾಡಲು ಬಯಸುತ್ತಾರೆ. ಕೆಲವರು ಅದನ್ನೇ ವೃತ್ತಿ (Profession) ಎಂದು ಭಾವಿಸಿರುತ್ತಾರೆ. ವದಂತಿಗಳ ಬಗ್ಗೆ ಪತ್ರಕರ್ತರದು ಎಂಥಾ ನಿಯತ್ತು ಅಂದ್ರೆ ಯಾರು ಸಹ ವದಂತಿಗಳನ್ನಷ್ಟೇ ರಿಪೀಟ್ ಮಾಡುವುದಿಲ್ಲ. ಜತೆಗೆ ತಮ್ಮ ಕಾಣ್ಕೆಯನ್ನೂ ಸೇರಿಸಿ [...] -
ನಮ್ಮ ಸಾಧನೆಯನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ನಾವೇಕೆ ಕುಬ್ಜರಾಗಬೇಕು?
ನೀವು ಪ್ರಕಾಶ ಅಯ್ಯರ್ ಅವರ ಹೆಸರನ್ನು ಕೇಳಿರುವ ಸಾಧ್ಯತೆ ಕಮ್ಮಿ ಎಂಬುದು ನನ್ನ ಊಹೆ. ಈ ಅಂಕಣದಲ್ಲಿ ಹಿಂದೊಮ್ಮೆ ಅವರ The Habit of Winning ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅವರು ಕಾರ್ಪೋರೆಟ್ ಜಗತ್ತಿನಲ್ಲಿ ಸೋಪಿನಿಂದ ಹಿಡಿದು ಕೋಕಾದ ತನಕ ಎಲ್ಲವನ್ನೂ ಮಾರಾಟ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಕಿಂಬರ್ಲಿ ಕ್ಲರ್ಕ್ ಲಿವರ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇತ್ತೀಚೆಗೆ ಅಯ್ಯರ್ ಅವರು ಹೇಳಿದ ಎರಡು ಸಾಮಾನ್ಯ ಆದರೆ ಕುತೂಹಲದ ಪ್ರಸಂಗವನ್ನು ಗಮನಿಸುತ್ತಿದ್ದೆ. [...] -
ಹೇಳಿ, ಮತದಾರನೆದುರು ಅದ್ಯಾವ ಆಯ್ಕೆ ಇದೆ?
ಈ ಸಲದ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲೆಂದು ನನ್ನ ಸಹೋದ್ಯೋಗಿ ಮಿತ್ರರು ಸೇರಿ ಒಂದು ನಿಮಿಷದ ಚಿತ್ರ ಮಾಡಿ ನನಗೆ ತೋರಿಸಿದರು. ತಳ್ಳುಗಾಡಿಯಲ್ಲಿ ತರಕಾರಿ ಮಾರುವವನ ಮುಂದೆ ಗೃಹಿಣಿಯೊಬ್ಬಳು ಚೌಕಾಶಿ ಮಾಡಿ ತರಕಾರಿ ಖರೀದಿಸುವ ದೃಶ್ಯ. ಆಕೆಗೆ ಯಾವ ತರಕಾರಿಯೂ ಇಷ್ಟವಾಗುವುದಿಲ್ಲ. ಇದು ಬಲಿತಿದೆ, ಇದು ಕೊಳೆತಿದೆ, ಇದಕ್ಕೆ ಇಷ್ಟೊಂದು ಬೆಲೆಯಾ, ಕಮ್ಮಿ ಕೊಡೊಲ್ವಾ, ಇಷ್ಟು ರೇಟಿಗೆ ಕೊಟ್ಟರೆ ಕೊಳ್ಳುತ್ತೇನೆ…ಎಂದೆಲ್ಲ ಆಕೆ ಚೌಕಾಶಿ ಮಾಡುತ್ತಿರುತ್ತಾಳೆ. ತರಕಾರಿಯವನ ಹಾಗೂ ಆ ಗೃಹಿಣಿಯ ಮಾತುಕತೆಯನ್ನು ಪಕ್ಕದಲ್ಲಿ ನಿಂತ [...]
-
ಒಂದೊಂದೇ ತುಣುಕು, ಭಾವಕೋಶಕ್ಕೆ ಗುಟುಕು
ನಿಮ್ಮ ಜತೆ ಸದಾ ಒಂದು ಪುಟ್ಟ ನೋಟ್ಬುಕ್ ಇಟ್ಟುಕೊಳ್ಳಿ. ದಿನಾಲೂ ನಿಮಗೆ ಏನೇನೋ ಯೋಚನೆ, ಕಲ್ಪನೆ ಸರಿದು ಹೋಗುತ್ತಿರುತ್ತದೆ. ಅವುಗಳಲ್ಲಿ ನಿಮಗೆ ಇಷ್ಟವಾದುದನ್ನು ನೋಟ್ ಮಾಡಿಕೊಳ್ಳಿ. ಪುಸ್ತಕ ಓದುವಾಗ, ಸಿನಿಮಾ ನೋಡುವಾಗ, ಗೆಳೆಯರೊಂದಿಗೆ ಹರಟೆ ಮುಗಿಸಿದಾಗ, ಗಣ್ಯರನ್ನು ಭೇಟಿ ಮಾಡಿ ಬಂದ ನಂತರ, ಸೆಮಿನಾರ್ ಅಥವಾ ಕಾರ್ಯಕ್ರಮದಲ್ಲಿ ಭಾಷಣ ಕೇಳುವಾಗ ನಿಮಗೆ ಇಷ್ಟವಾದ ಸಂಗತಿ, ಸಾಲು, ಜೋಕು, ಕತೆ…ಹೀಗೆ ಎಲ್ಲವನ್ನೂ ನೋಟ್ಸ್ ಮಾಡಿಕೊಳ್ಳುತ್ತಾ ಹೋಗಬೇಕು. ಒಂದೆರಡು ವರ್ಷಗಳ ಬಳಿಕ ಸುಮ್ಮನೆ ತೆರೆದು ನೋಡಬೇಕು.
ಎಂಥ ಮಜಾ ಆಗಿರುತ್ತದೆ ಗೊತ್ತಾ? [...] -
ಎಲ್ಲ ಸಮಸ್ಯೆಗಳಿಗೂ ಪರಿಹಾರದ ಪಾಠ ಹೇಳುತ್ತದೆ ಪ್ರಕೃತಿ!
Go back to nature!
ಹಾಗಂತ ಹೇಳಿದವನು ಆಪಲ್ ಕಂಪ್ಯೂಟರ್ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್. ಸ್ಟೀವ್ ಜಾಬ್ಸ್ಗೆ ಬ್ಲಾಗರ್ನೊಬ್ಬ ‘ಜಗತ್ತಿನೆಲ್ಲೆಡೆ ನಿಮ್ಮ ಕಂಪನಿಯ ಕಂಪ್ಯೂಟರ್, ಐಫೋನ್, ಐಪಾಡ್, ಐಪಾಡ್ ಟಚ್ ಮುಂತಾದ ಉಪಕರಣಗಳೆಲ್ಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಇವೆಲ್ಲವುಗಳನ್ನು ತಯಾರಿಸುವುದರಿಂದ ಪ್ರಕೃತಿ ಮೇಲೆ ಎಂಥ ಪರಿಣಾಮವಾಗಬಹುದು? ಈ ಉಪಕರಣಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಎಷ್ಟು ಕರೆಂಟು ಬೇಕು? ಪರಿಸರದ ಮೇಲೆ ನೀವು ಎಂಥ ಆಕ್ರಮಣ ಮಾಡುತ್ತಿದ್ದೀರಿ ಎಂಬುದರ ಕಲ್ಪನೆ ನಿಮಗಿದೆಯಾ?’ ಎಂದು ಕೇಳಿದ್ದಕ್ಕೆ ಆತ [...] -
ನೀರು ಉಳಿಸಲು ಇವರು ಮನೆ ಮನೆ ನಲ್ಲಿ ರಿಪೇರಿ ಮಾಡ್ತಾರೆ!
ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು, ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ. ಅವರ ಕೃತಿಗಳು, ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜೊತೆಗೆ, ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರ್ಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ ಕೂಡ ಅಬಿದ್ [...]
-
ಸಿಂಹಗಳೊಂದಿಗೆ ‘ಸಹಜ ಪ್ರೀತಿ’ಗೆ ಬಿದ್ದವನ ಬೆರಗು!
ಇದು ಟಿವಿ ಚಾನೆಲ್ ಸೇರಿದ್ದರ ಪ್ರಭಾವವೋ ಅಥವಾ ಸಹಜ ಸೆಳೆತವೋ ಅಥವಾ ಎರಡೂ ಇರಬಹುದು, ಇತ್ತೀಚೆಗೆ ಸಿನಿಮಾ ಮತ್ತು ಡಾಕ್ಯುಮೆಂಟರಿಗಳನ್ನು ಹೆಚ್ಚಾಗಿ ನೋಡಲಾರಂಭಿಸಿದ್ದೇನೆ. ಒಂದು ಪುಸ್ತಕ ಓದಿದ ಸುಖ, ಸಮಾಧಾನ ಸಿಗುತ್ತದೆ. ಪುಸ್ತಕ ಓದಲು ಕನಿಷ್ಟ ಒಂದೆರಡು ದಿನಗಳಾದರೂ ಬೇಕು. ಸಿನಿಮಾ, ಡಾಕ್ಯುಮೆಂಟರಿಗಳು ಹಾಗಲ್ಲ, ಒಂದೆರಡು ತಾಸಿನಲ್ಲಿ ನೋಡಿ ಮುಗಿಸಬಹುದು.
ಆದರೆ ಪುಸ್ತಕ ಓದಿನ ರುಚಿಯೇ ಬೇರೆ. ಈ ಮಾತನ್ನು ಸಿನಿಮಾ, ಡಾಕ್ಯುಮೆಂಟರಿಗಳಿಗೂ ಅನ್ವಯಿಸಬಹುದು. ನ್ಯಾಶನಲ್ ಜಿಯಗ್ರಾಫಿಕ್, ಬಿಬಿಸಿ, ಡಿಸ್ಕವರಿ ಮುಂತಾದ ಸಂಸ್ಥೆಗಳು ಕೆಲವು ಅದ್ಭುತವೆನಿಸುವ ಡಾಕ್ಯುಮೆಂಟರಿಗಳನ್ನು ಹೊರತಂದಿವೆ. [...] -
ಮಗನ ಸಾವಿನ ಪ್ರಶ್ನೆಗೆ, ದೇವರು ಕೊಟ್ಟ ಉತ್ತರ!
ಮಗನನ್ನು ಆಸ್ಪತ್ರೆಗೆ ಸೇರಿಸಿ ಆಗಲೇ ತಿಂಗಳಾಗುತ್ತಾ ಬಂತು. ಡಾಕ್ಟರು ಖಡಕ್ಕಾಗಿ ಏನೂ ಹೇಳುತ್ತಿಲ್ಲ. ‘ಬಂದಿರುವ ಕಾಯಿಲೆ ಜ್ವರವೋ, ತಲೆನೋವೋ, ಕೀಲುನೋವೋ ಆಗಿದ್ದರೆ, ಇಂತಿಷ್ಟೇ ದಿನದಲ್ಲಿ ವಾಸಿಯಾಗುತ್ತದೆ ಎಂದು ಹೇಳಬಹುದಿತ್ತು. ಆದರೆ, ನಿಮ್ಮ ಮಗುವಿಗೆ ಬಂದಿರುವ ಕಾಯಿಲೆ ಅಂತಿಂಥದ್ದಲ್ಲ; ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ಕಷ್ಟ. ಆದರೂ ನಮ್ಮ ಪ್ರಯತ್ನ ನಾವು ಮಾಡ್ತೇವೆ. ಈ ದಿನಗಳಲ್ಲಿ ತುಂಬಾ ಜನ ಕ್ಯಾನ್ಸರ್ ಗೆದ್ದಿದ್ದಾರೆ. ಈ ಸಂಬಂಧವಾಗಿ ಪ್ರತಿ ತಿಂಗಳೂ ಪೇಪರಿನಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ನಿಮ್ಮ ಮಗನ ಕಾಯಿಲೆಯೂ ಗುಣವಾಗಲಿ ಎಂದೇ ಪ್ರಾರ್ಥಿಸೋಣ. [...]
-
ಪ್ರೇಮಿಗಳ ದಿನಕ್ಕೆ ಜೀವನ ಪ್ರೀತಿಯ ಕತೆಗಳ ಗುಚ್ಛ
ನಾನು ಹಲವು ಬಾರಿ ಯೋಗಿ ದುರ್ಲಭಜೀ ಕುರಿತು ಪ್ರಸ್ತಾಪಿಸಿದ್ದೇನೆ. ಅವರ ವ್ಯಕ್ತಿತ್ವ, ವಿಚಾರ ಅನೇಕರಿಗೆ ಇಷ್ಟವಾಗಿದೆ. ಇನ್ನು ಕೆಲವರಿಗೆ ಅವರ ವ್ಯಕ್ತಿತ್ವ ನಿಗೂಢವೂ ಹೌದು. ಮೂಲತಃ ವಜ್ರದ ವ್ಯಾಪಾರಿಯಾಗಿರುವ ಅವರು ಸಾವಿರಾರು ಕೋಟಿ ರೂಪಾಯಿ ಗಳಿಸಿ, ಗಳಿಸಿದ್ದೆಲ್ಲವನ್ನೂ ದಾನ ಮಾಡಿ, ಪುನಃ ಆರಂಭದಿಂದ ಶುರು ಮಾಡಿ, ಮತ್ತೆ ಹಣ ಗಳಿಸಿ ಅದನ್ನೆಲ್ಲ ಸಮಾಜಕ್ಕೆ ಅರ್ಪಿಸುವ ಅವರ ಮನೋಭಾವ ಹಲವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ದುರ್ಲಭಜೀ ಅವರಿಗೆ ಗಳಿಸುವುದೂ ಗೊತ್ತು. ಗಳಿಸಿದ್ದೆಲ್ಲ ತನ್ನದಲ್ಲ, ಅದು ಸಮಾಜದ್ದು ಎಂದು ಬರಿದಾಗುವ [...]
